ಸೋನೆ

ಹನಿಹನಿ ಬಿದ್ದು ಲಯ ಭೋರೆಂದು
ಸುರಿದಾಗ ಬೀದಿಯಲಿ ಹರಿಯುವ
ಧಾರೆ ಹಳ್ಳವಾಗಿ ನದಿಯಾಗಿ
ಸಮುದ್ರ ಸೇರುವ ಧ್ಯಾನದಲ್ಲಿ ತಟಸ್ಥ
ವಾಗಿ ಕುಳಿತಿದೆ ಪಾಚಿಗಟ್ಟಿದ ಪಾಗಾರದ
ಮೇಲೆ ನೀಲಿಹಕ್ಕಿ ತೊಯ್ದು ತಪ್ಪಡಿಯಾಗಿ.

ಸಾಲು ಸಾಲು ಪಾಠವ ಮುಗಿಸಿದ ಮೇಷ್ಟ್ರು
ಕೈಯಲ್ಲಿ ಕೋಲು ನೋಡಿದ ಪಿಳಿಪಿಳಿ ಕಣ್ಣುಗಳು
ಬೆರಳು ಸಂದಿ ಪೆನ್ಸಿಲ್ಲು ಗೀಚುವ ಗಣಿತ
ಬೀಜ ಬಿತ್ತುವ ಬಿಕ್ಕುವ ನೆಲದಲಿ
ಚಿಗುರಿ ಚಿಮ್ಮುವ ಕನಸಿನ ಸದ್ದು
ಗರಿಕೆದರಿ ಹಾರುವ ಗುಬ್ಬಿ ಹನಿಗೆ ಮುದುರಿ
ನಿಟ್ಟುಸಿರು ಬಿಟ್ಟ ಸಮಯ ಅಕ್ಷರಗಳು ತೂಗುತ್ತವೆ
ಮೋಡಗಳಲ್ಲಿ ಹನಿಯಾಗಿ.

ಕಾಲು ಮುರಿದು ಬಿದ್ದಿವೆ ಹಾರುವ ಚಿಟ್ಟೆಗಳು
ನಿನ್ನೆ ನಾಳೆಗಳ ಕಲಿಸಿ ಈ ದಿನದಲ್ಲಿ ಸುರಿದ
ಮಳೆಗೆ ಬಣ್ಣ ತೊಳೆದು ರಾಡಿ ನೀರು ಎಲ್ಲೆಲ್ಲೂ
ಜೋಗುಳದ ಹಾಡಿನಲಿ ಚಿಕ್ಕಳಿಕೆ ಅಡುಗೆ
ಒಲೆ ಉರಿಯಲಿಲ್ಲ ಒಳಗೆ, ಮಾಡಿನ
ಮೇಲೆ ಜಿನುಗಿದ ಹನಿಗಳು ಅಂಗಳದ
ತುಂಬೆಲ್ಲಾ ತೂತು ತೂತು ಹೂಡಿವೆ.

ಸೋಗಲಾಡಿ ಸೋನೆ ಮತ್ತದೇಧಾವಂತ ಹೊತ್ತು
ಬರುತ್ತಾಳೆ ಕವಿತೆ ಹುಟ್ಟುವ ತವಕದ ಇಳಿಸಂಜೆಯಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿದ್ಯಾರ್ಥಿಗಳ ಸಮಸ್ಯಾತ್ಮಕ ನಡವಳಿಕೆಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೬೬

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

cheap jordans|wholesale air max|wholesale jordans|wholesale jewelry|wholesale jerseys